ಬೈಂದೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮ ಬೈಂದೂರು ಜೆ.ಎನ್.ಆರ್ ಕಲಾ ಮಂದಿರದಲ್ಲಿ ಜೂನ್ 29ರಂದು ಸಂಜೆ ನಡೆಯಲಿದೆ.
ಈ ಬಗ್ಗೆ ರೋಟರಿ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆಳ್ವಾಸ್ ನುಡಿಸಿರಿ ಘಟಕ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಓಂ ಗಣೇಶ ಉಪ್ಪುಂದ, ಅಧ್ಯಕ್ಷರಾಗಿ ಸುಧಾಕರ ಪಿ ಬೈಂದೂರು, ಉಪಾಧ್ಯಕ್ಷರಾಗಿ ರಾಘವೇಂದ್ರ.ಎಮ್.ಸಾಮಗ, ಗಣೇಶ ಕಾರಂತ ಬೈಂದೂರು, ಎಮ್.ಗೋವಿಂದ ನಾಯ್ಕನಕಟ್ಟೆ , ಕಾರ್ಯದರ್ಶಿಗಳಾಗಿ ರಾಮಕೃಷ್ಣ ದೇವಾಡಿಗ, ಸುರೇಶ ಪೂಜಾರಿ, ಜೊತೆ ಕಾರ್ಯದರ್ಶಿಗಳಾಗಿ ಆನಂದ ಮಧ್ದೋಡಿ, ಗುರುರಾಜ್ .ಬಿ. ಪಡುವರಿ, ಖಜಾಂಜಿಯಾಗಿ ಮಂಜುನಾಥ ಶೆಟ್ಟಿ ಬೈಂದೂರು ಆಯ್ಕೆಯಾದರು. ಈ ಸಂಧರ್ಭದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.


