ಬೃಹತ್ ಸಮಾರಂಭಕ್ಕೆಗೆ ಸಕಲ ಸಿದ್ದತೆ. ಸಾಗರೋಪಾದಿಯಲ್ಲಿ ಭಾಗಿಯಾಗುತ್ತಿರುವ ಜನ






ಮೂಡುಬಿದಿರೆ: ವಿಶ್ವ ನುಡಿಸಿರಿ ವಿರಾಸತ್ ಗೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಇದ್ದು ಸಮಾರಂಭವನ್ನು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ವಿವಿಧ ಉರುಗಳಿಗೆ ಸಾಹಿತ್ಯಭಾಮಾನಿಗಳು, ವಿದ್ಯಾಥರ್ಿಗಳು ತಂಡೋತಂಡವಾಗಿ ಆಗಮಿಸುತ್ತಿದ್ದಾರೆ. ಆಳ್ವಾಸ್ ಕ್ಯಾಂಪಸ್ ಹಾಗೂ ವಿದ್ಯಾಗಿರಿಯ ಮೈದಾನದೂದ್ದಕ್ಕೂ ವಿವಿಧ ಸಂಸ್ಕೃತಿ, ಐತಿಹ್ಯವನ್ನು ಸಾರುವ ಕಲಾಕೃತಿಗಳು, ಪ್ರತಿಮೆಗಳು, ಫಲ-ಪುಷ್ಟ ಪ್ರದರ್ಶನ, ಪುಸ್ತಕ ಪ್ರದರ್ಶನ ಮುಂದಾದವುಗಳು, ಸಾಲುಗಟ್ಟಿ ಹಾಕಲಾಗಿರುವ ಗೂಡುದೀಪಗಳು ಇಲ್ಲಿನ ಸೌದರ್ಯವನ್ನು ಇಮ್ಮಡಿಗೊಳಿಸಿದೆ. ಅಚ್ಚುಕ್ಕಟ್ಟಾದ ಉಟೋಪಚಾರ ವ್ಯವಸ್ಥೆ ಸಾಹಿತ್ಯ ಕಲಾಭಿಮಾನಿಗಳ ಹಸಿವನ್ನು ತಣಿಸಿದೆ.
   20ರಿಂದ ಆರಂಭಗೊಳ್ಳಲಿರುವ ಕೃಷಿ ಸಿರಿಗೂ ಭರದ ತಯಾರಿಗಳು ನಡೆಯುತ್ತಲಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಬೃಹತ್ ಮೆರವಣಿಗೆ, ಬಳಿಕ ರತ್ಯಾಕರವಣರ್ಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭಗಳು ಜರುಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರತ್ನಾಕರ ವಣರ್ಿ ವೇದಿಕೆಯಲ್ಲಿ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನ, ಡಾ. ವಿ. ಎಸ್. ಆಚಾರ್ಯ ವೇದಿಕೆಯಲ್ಲಿ ಶರಶಯ್ಯ ನಾಟಕ, ಕೆ. ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಜುಗಾರಿ ಕ್ರಾಸ್ ನಾಟಕ ಪ್ರದರ್ಶನಗೊಳ್ಳಲಿದೆ.