ನುಡಿಸಿರಿಯ ಸಾಸ್ಕೃತಿಕ ಸಂಜೆ ಸಂಗೀತ-ನೃತ್ಯ- ನಾಟಕಗಳ ಸಮಾಗಮ

ಮೂಡುಬಿದಿರೆ: ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಮತ್ತು ತಂಡದವರಿಂದ ವಂದೇ ಮಾತರಂ ನೃತ್ಯ ರೂಪಕ ಜರುಗಿತು. ಬಳಿಕ ಹುಬ್ಬಳ್ಳಿಯ ಮಯೂರ ನೃತ್ಯ ತಂಡದವರಿಂದ ವಿದೂಷಿ ಹೇಮಾ ಡಿ. ವಾಘವೋಡೋ ನಿರ್ದೇಶನಲ್ಲಿ ಭರತನಾಟ್ಯ ಕಾರ್ಯಕ್ರಮ ಜರುಗಿತು.
   ಕೆ. ವಿ ಸುಬ್ಬಣ್ಣ ರಂಗಮಂದಿರದಲ್ಲಿ ಕಲವಿದರುಗಳಾದ ಶಂಕರ್ ಶಾನುಭೋಗ್, ರಮೇಶ್ಚಂದ್ರ, ಕೆ. ಎಸ್ ಸುರೇಖಾ, ಮೃತ್ಯುಂಜಯ, ಸುಪ್ರಿಯ ದೊಡ್ಡವರ, ಸ್ವರ್ಶ, ಸಂಗೀತ, ಬಾಲಚಂದ್ರ, ಸುಪಿಯ ರಘುನಂದನ್ ಇವರಿಂದ ಸುಗಮ ಸಂಗೀತ ನಡೆಯಿತು. ಬಳಿಕ ಪ್ರಕಾಶ ಶೇಟ್ಟಿ ನಿರ್ದೇಶನದ ಅಭಿಜ್ಞಾನ ಶಾಕುಂತಲ ನಾಟಕ ಪ್ರದರ್ಶನಗೊಂಡಿತು.
ಕು. ಶಿ. ಹರಿದಾಸ್ ಭಟ್ ವೇದಿಕೆಯಲ್ಲಿ ನಳ ಕಾರ್ಕೋಟಕ ಯಕ್ಷನೃತ್ಯ ನಡೆಯಿತು. 
ಕಾರ್ಕಳ ಬಿ. ಗಣಪತಿ ಪೈ ವೇದಿಕೆಯಲ್ಲಿ ಕರ್ನಾ ಟಕ ಶಾಸ್ತ್ರೀಯ ಸಂಗೀತ, ಭರಟನಾಟ್ಯ, ಭರತಾಂಜಲಿ ಕಾರ್ಯಕ್ರಮಗಳು ಜರುಗಿದವು.

ಡಾ. ಕೋಯಿರಾ ಎನ್. ಬಾಳೆಪುಣಿ ವೇದಿಕೆಯಲ್ಲಿ ಕು. ನಯನ ಗೌರಿ ಸೇರಾಜೆ ಇವರಿಂದ ಶ್ರೀ ಸುಬ್ರಮಣ್ಯ ಕ್ಷೇತ್ರ ಮಹಾತ್ಮೆ ಹರಿಕಥೆ, ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೋಂಬೆಯಾಟ ಸಂಘದವರಿಂದ ನರಕಸುರ ವಧೆ ಗೊಂಬೆಂಯಾಟ ಜರುಗಿತು