ಮನಸೂರೆಗೊಳಿಸಿದ ವಿಶ್ವ ನುಡಿಸಿರಿ ವಿರಾಸತ್ ಮೆರವಣಿಗೆ

ಮೂಡಬಿದಿರೆ: ಜಾನಪದ ಕಲೆ ಮತ್ತು ಕಲಾವಿದರನ್ನು ಬಿಂಬಿಸಿದ ಸುಂದರ ಮೆರವಣಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಸುಂದರ ಮುನ್ನುಡಿಯನ್ನು ಬರೆಯಿತು. ಆಳ್ವಾಸ್ ಸಮಯದಂತೆ ಮಧ್ಯಾಹಣ 3 ಗಂಟೆಗೆ ಕರಾವಳಿಯ ಕದೋನಿಗಳ ಸದ್ದಿನೊಂದಿಗೆ ಅನುರಣಿಸಿ ಸಾವಿರಾರು ಕಲಾವಿದರ ಸಂಭ್ರಮದೊಂದಿಗೆ ಮೂಡುಬಿದಿರೆಯ ಹನುಮಾನ್ ದೇಮಾಲಯದಿಂದ ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯ ವರೆಗೆ ಸಾಗಿಬಂತು. 25 30 ಅಡಿ ಉದ್ದದ ಭಾರತೀಯ ಡೈನೋಸರ್ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ಮೂಡಿಬಂತು. ಕೆರಳದ ಶಕ್ತಿ ದೈವಗಳು ಮೆರವಣಿಗೆಗೆ ದೈವ ಕಳೆ ನೀಡಿದರೆ ಕರಾವಳಿ ಒಂದೇ ಒಂದು ದೈವಗಳ ವೇಷವಾಗಲಿ ನೆನಪಾಗಲಿ ಮೆರವಣಿಗೆಯಲ್ಲಿ ತಾಂತ್ರಿಕ ಕಾರಣಗಳಿಗಾಗಿ ಇರದಿದ್ದುದು ಎದ್ದು ಕಾಣುತ್ತಿತ್ತು. ಕಂಸಾಳೆ, ದೊಳ್ಳು ಕುಣಿತ, ಗೊಂಬೆ ಕುಣಿತ, ವಿದ್ಯಾಥರ್ಿಗಳ ದಂಡು, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿವಿಧ ವೇಷಗಳು, ಕೀಲು ಕುದುರೆ ನೃತ್ಯ, ಹಲಗೆ ಕಣಿತ, ಯಕ್ಷಗಾನದ ವೇಷಗಳು, ಕೋಲಾಟ, ನವಿಲು ನೃತ್ಯ, ಕಡುಬಿ ನೃತ್ಯ, ಭಜನಾ ತಂಡ, ಮಡಿಕೇರಿಯ ಮಹಿಳಾ ತಂಡ, ಕೋಲು ಕುಣಿತ, ಚಂಡೆ ಬಳಗ, ದೈವ ದೇವ, ದೇವರ ವೇಷಗಳು, ಶ್ರೀಲಂಕಾ ಕುಣಿತ, ಬಂಜಾರು ನೃತ್ಯ, ಮಹಿಳಾ ಚಂಡೆ ಸೇರಿದಂತೆ ಹಿಂದೆದೂ ಸಾಹಿತ್ಯ ಸಮ್ಮೇಳನಗಳು ಕಾಣದ ರೀತಿಯಲ್ಲಿ ಮೇರವಣಿಗೆ ಮೂಡಿಬಂದವು.
ಎನ್ ಎಸ್ ಎಸ್, ಎನ್.ಸಿ.ಸಿ ಸೇರಿದಂತೆ ಸಾವಿರಾರು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರಸ್ತೆಯ ಇಕ್ಕೆಗಳಲ್ಲಿ ಊಹೆಗೆ ನಿಲುಕದಷ್ಟು ಸಂಖೆಯಲ್ಲಿ ಜನರು ಭಾಗವಹಿಸಿದ್ದು ಮೆರವಣಿಗೆಗೆ ಉತ್ತಮ ಚಾಲನೆ ನಿಡಿದಂತಾಯಿತು.