ಅನುಭವದಿಂದ ಹುಟ್ಟುವ ಕಥೆಗಳು ಹೆಚ್ಚು ಅರ್ಥಪೂರ್ಣವಾದುದು: ಡಾ ಬಾಳಾ ಸಾಹೇಬ್

ನುಡಿಸಿರಿಯ ಎರಡನೇ ದಿನವಾದ ಇಂದು ಕಥಾ ಗೋಷ್ಠಿಯಲ್ಲಿ ಡಾ. ಬಾಳಾ ಸಾಹೇಬ್ ಲೋಕಾಪುರ್ ತಮ್ಮ ಕಥೆಯನ್ನು ಮಂಡಿಸಿದರು. ಇದಕ್ಕೂ ಮನ್ನ ಮಾತನಾಡಿದ ಅವರು ಕಂಡ ಬದುಕಿನ ಕಥೆಗಳಿಗಿಂತ ಉಂಡ ಬದುಕಿನ ಕಥೆಗಳೇ ದೊಡ್ಡದು. ಕಟ್ಟುವ ಕಥೆಗಳಿಗಿಂತ ಅನುಭವದಿಂದ ಹುಟ್ಟುವ ಕಥೆಗಳು ಹೆಚ್ಚು ಅರ್ಥಪೂರ್ಣವಾದುದು ಎಂದರು. ಗೋಷ್ಟಿಯಲ್ಲಿ ನುಡಿಸಿರಿಯ ಸರ್ವಾಧ್ಯಕ್ಚ ಪ್ರೋ ನಿ. ಅಹಮ್ಮದ್, ಡಾ. ಮೋಹನ್ ಆಳ್ವ ಉಪಸ್ಥಿತರಿದ್ದರು.