ವರ್ತಮಾನವೇ ಒಂದು ತಲ್ಲಣದ ವಿಷಯ: ಡಾ. ನಾ. ಡಿಸೋಜ

ಮೂಡುಬಿದಿರೆ: ಪ್ರಗತಿಪರ ಭವಿಷ್ಯದ ಚಿಂತನೆ ಇಲ್ಲದ ವರ್ತಮಾನವೇ ಒಂದು ತಲ್ಲಣದ ವಿಷಯವಾಗಿದೆ. ಹಿಂದಿನದೆಲ್ಲವನ್ನು ಕಡೆಗಣಿಸಿ ಸುಖಭೋಗದತ್ತ ಒಲಿದು ಕೊನೆಯಲ್ಲಿ ಯಾವುದನ್ನು ಪಡೆಯದೇ ತೊಳಲಾಡುತ್ತಿದ್ದೇವೆ. ಯಂತ್ರಗಳ ಮೇಲಿನ ಅವಲಂಬನೆ ನಮ್ಮನ್ನು ಆತಂಕಕ್ಕಿಡು ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಡಾ. ನಾ. ಡಿಸೋಜ ಹೇಳಿದರು.
ಅವರು ಇಂದಿನಿಂದ ಆರಂಭಗೊಂಡ 'ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನ್ಮಡಿಯ ರಾಷ್ಟ್ರೀಯ ಸಮ್ಮೇಳನವನ್ನು ರತ್ನಾಕರವರ್ಣಿ ವೇದಿಕೆಯಲ್ಲಿ ಭತ್ತದ ತೆನೆಗೆ ಹಾಲು ಎರೆದು, ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ಜ್ಞಾನಪೀಠಿಗಳು ಹೊರಗಿನಿಂದ ಬಂದವುಗಳಾಗಿವೆ. ಆದರೆ ನಾಡಿನೊಳಗೆ ಇರುವ ಭಾಷಾ ಪೀಠಗಳು ನಾಡು ನುಡಿಯನ್ನು ಕಟ್ಟುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿವೆ. ಆಳ್ವಾಸ್ ನುಡಿಸಿರಿ ಅಂತಹ ಒಂದು ಪೀಠಗಳಲ್ರ್ಲೆಂದು. ಸಮ್ಮೇಳನಗಳು ಹೇಗೆ ನಡೆಯಬೇಕು ಎನ್ನುವುದಕ್ಕೆ ನುಡಿಸಿರಿ ಮಾದರಿಯಾಗಿ ನಿಂತಿದೆ. ಒಂದು ನಿಶ್ಷಿತವಾದ ವಿಷಯವನ್ನಿಟ್ಟುಕೊಂಡು ಸಮ್ಮೇಳನದುದ್ದಕ್ಕೂ ಅದನ್ನು ವಿಮರ್ಷೆಗೊಡ್ಡುವ ಪ್ರಯತ್ನ ವಿಶೇಷವಾದುದು ಎಂದರು.
ನಾಡೋಜ ಡಾ. ಸಿದ್ಧಲಿಂಗಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ನುಡಿಸಿರಿಯ ರೂವಾರಿ ಡಾ| ಎಂ ಮೋಹನ ಆಳ್ವ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.
ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು, ಕ್ಯಾಷ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ಸುಪ್ರಿಯ ಡಿ. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪೋಟೋಗಳು: ಅಪಾರ ಉಜಿರೆ