ವಿದ್ಯಾಗಿರಿ: ಆಳ್ವಾಸ್ ನುಡಿಸಿರಿ ೨೦೧೪ರ ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಸಿದ್ಧಲಿಂಗಯ್ಯನವರ ಆತ್ಮಕಥೆ ಊರುಕೇರಿಯ ೧೪ನೇ ಆವೃತ್ತಿಯನ್ನು ಸಮ್ಮೇಳನದ ಉದ್ಘಾಟಕ ಡಾ. ನಾ. ಡಿಸೋಜ ಅನಾವರಣಗೊಳಿಸಿದರು. ಇದು ಕನ್ನಡ ಸಾಹಿತ್ಯದ ಆತ್ಮಕಥೆ ವಿಭಾಗದಲ್ಲಿ ಹದಿನಾಲ್ಕು ಮುದ್ರಣಗಳನ್ನು ಕಾಣುತ್ತಿರುವ ಏಕೈಕ ಕೃತಿಯಾಗಿದೆ.
ಇದೇ ಸಂದರ್ಭದಲ್ಲಿ ಆಳ್ವಾಸ್ ವಿಶ್ವ ನುಡಿಸಿರಿಯ ವಿಶೇಷ ಸಚಿಚಿಕೆ ಹಾಗೂ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವಿಶೇಷ ಸ ಂಚಿಕೆ ಆಳ್ವಾಸ್ ಮಾಧ್ಯಮ ಬಿಡುಗಡೆಗೊಂಡಿತು.