ಮೂಡುಬಿದಿರೆ: ತುಳುನಾಡಿನಲ್ಲಿ ದೈವದ ಕುರಿತಾದಂತಹ ಸಂಪ್ರದಾಯಗಳ ಕುರಿತು ನಿಜವಾದಂತಹ ಸಂಶೋಧನೆಗಳು ಇನ್ನು ಹೆಚ್ಚಿನ ರೀತಿಯಲ್ಲಿ ಜರುಗಬೇಕಾಗಿದೆ ಎಂದು ಪ್ರೊ. ಪೂವಪ್ಪ ಕಣಿಯೂರು ಅಭಿಪ್ರಾಯ ಪಟ್ಟರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಜನಪದ ಸಿರಿಯಲ್ಲಿ ನಾಡೋಜ ಎಚ್.ಎಲ್ ನಾಗೇಗೌಡ ವೇದಿಕೆಯಲ್ಲಿ ಉಪನ್ಯಾಸ ನೀಡುತ್ತಿದ್ದರು. ತುಳುನಾಡಿನ ಜಾನಪದ ಸಂಸ್ಕಂತಿಯನ್ನು ಇಂದು ವಿಶ್ವದಾದ್ಯಂತ ಪ್ರಚುರ ಪಡಿಸುವುದು ಮತ್ತು ಅದರ ಸಾಧಕ ಬಾಧಕಗಳ ಕುರಿತು ಅವಲೋಕಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

