ರಂಗಭೂಮಿಗೆ ಚಿಕಿತ್ಸಕ ಗುಣವಿದೆ: ಮಂಡ್ಯ ರಮೇಶ್

ಮೂಡುಬಿದಿರೆ: ರಂಗಭೂಮಿಗೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿ ಇದೆ. ದೇಶವನ್ನೇ ಬದಲಿಸಿದ ಗಾಂಧೀಜಿಯವರನ್ನು ಬದಲಿಸಿದ್ದು ‘ಹರಿಶ್ಚಂದ್ರ’ ನಾಟಕ. ಇಂತಹ ಚಿಕಿತ್ಸಕ ಶಕ್ತಿ ಇರುವ ರಂಗಭೂಮಿಯತ್ತ ಯುವಕರು ನಿಸ್ವಾರ್ಥರಾಗಿ ಒಲವು ತೋರಿಸಬೇಕು ಎಂದು ಮಂಡ್ಯ ರಮೇಶ್ ನುಡಿದರು.
ಅವರು ಮಹಾ ಸಮ್ಮೇಳನಗಳಾದ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್’ ನಲ್ಲಿ ‘ರಂಗಭೂಮಿ ಮತ್ತು ವ್ಯಕ್ತಿತ್ವ ವಿಕಸನ’ ಎಂಬ ವಿಷಯ ಕುರಿತು ಪಂಜೆ ಮಂಗೇಶರಾಯ ವೇದಿಕೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.