ಅತಿಯಾದ ರೋಚಕತೆ ಮಾಧ್ಯಮಕ್ಕೆ ಮಾರಕ: ಟಿ. ಎನ್. ಸಿತಾರಂ

ಮೂಡುಬಿದಿರೆ: ಮಾಧ್ಯಮದಿಂದಾಗಿ ಸಾಹಿತ್ಯಕ್ಕೆ ಹಿನ್ನೆಡೆಯಾಗುತ್ತಿದೆ ಎಂದಾದರೆ ಇದಕ್ಕೆ ಕಾರಣ ಮಾಧ್ಯಮವೇ, ಟಿಆರ್ಪಿಯ ಪ್ರಭಾವವೇ ಅಥವಾ ಜನರೆ ಎಂಬುದನ್ನು ಮೊದಲು ಯೋಚಿಸಬೇಕಾಗಿದೆ. ಎಂದು ನಿರ್ಧೇಶಕ ಟಿ. ಸಿತಾರಾಮ ಹೇಳಿದರು 
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ನಾಲ್ಕನೇ ದಿನವಾದ ಇಂದು ವಿಚಾರಗೋಷ್ಠಿಯಲ್ಲಿ ಮಾಧ್ಯಮ ಎಂಬ ಕುರಿತು ಮಾತನಾಡುತ್ತಿದ್ದರು.
ಮಾಧ್ಯಮಗಳಿಂದಾಗಿ ಮನುಷ್ಯ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದೆವೆ. ಟಿರ್ಪಿಯಿಂದಾಗಿ ಮನುಷ್ಯ ತಲ್ಲಣದಲ್ಲಿ ಸಿಲುಕೊಂಡಿದ್ದಾನೆ. ಅತಿಯಾಗಿ ತೋರಿಸುವ ರೋಚಕತೆ ಮಂದೆ ಮಾಧ್ಯಮಕ್ಕೆ ಮಾರಕವಾಗಬಹುದು ಎಂದು ಅವರು ಎಚ್ಚರಿಸಿದರು,.