ಆತ್ಮವಿಸ್ವಾಸವನ್ನು ಹೆಚ್ಚಿಸುವ ತುಡಿತ ಆತ್ಮಗೌರವಕ್ಕೆ ಧಕ್ಕೆಯನ್ನುಂಟುಮಾಡದಿರಲಿ: ಜಯಂತ್ ಕಾಯ್ಕಿಣಿ



ಮೂಡುಬಿದಿರೆ: ನಮ್ಮ ದೇಶಿಗರು ಕಳೆದ ಐವತ್ತು ವರ್ಷಗಳಿಂದ ಭಾವೈಕ್ಯತೆಯಿಂದ ಬೆಸೆದುಕೊಂಡಿದ್ದರೇ ಅದಕ್ಕೆ ಚಿತ್ರಗೀತೆಗಳ ಕೊಡುಗೆ ಅಗಾಧವಾದುದು. ಹಾಡುಗಳು ಜನಮಾನಸದೊಂದಿಗೆ ತಳುಕುಹಾಕಿಕೊಂಡಿದೆ. ಇಂದು ಸಿನೆಮಾ ಹಾಡುಗಳನ್ನೂ ಹೆಚ್ಚಾಗಿ ಆಸ್ವಾದಿಸುವ ಯುವ ಸಮುದಾಯ ಹುಟ್ಟಿಕೊಂಡಿದ್ದು, ಈ ಕ್ಷೇತ್ರವನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಇದೆ. ಸಿನೆಮಾ ಹಾಡುಗಳು ಸರಳ ಹಾಗೂ ಮನಮುಟ್ಟುವ ಹಾಗಿರಬೇಕು ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.

     ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂರನೇ ದಿನವಾದ ಇಂದು ಪಂಜೆ ಮಂಜೇಶರಾಯ ವೇದಿಕೆಯಲ್ಲಿ 'ಇವತ್ತನ ಭಾವ ಪ್ರಪಂಚ' ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು
    ಪೋಷಕರು ಟಿ.ವಿ ಮಾಧ್ಯಮದಲ್ಲಿ ಬರುವುದೆಲ್ಲವೂ ಸತ್ಯವೆಂಬ ಭ್ರಮೆಯಲ್ಲಿದ್ದಾರೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿರುತ್ತದೆ. ಇದನ್ನು ಅರಿಯದೆ ರಿಯಾಲಿಟಿ ಶೋ ನಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳು ಗೆಲ್ಲಬೇಕು, ಹಣ ಮಾಡಬೇಕು ಎಂಬ ಒತ್ತಡ ಹೇರುತ್ತಿದ್ದಾರೆ. ಪರಿಣಾಮವಾಗಿ ಮಕ್ಕಳಿಗೆ ವಾಸ್ತವದ ಬದುಕಿನೊಂದಿಗೆ ನೇರ ಸಂಪರ್ಕವನ್ನಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೇಳೆಸುವ ತುಡಿತದಲ್ಲಿ ಆತ್ಮಗೌರವನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವುದು ಶೋಚನೀಯವಾದುದು ಎಂದರು. 

ಯುವಜನತೆ ತಮ್ಮ ರೋಲ್ ಮಾಡೆಲ್ ಗಳನ್ನು ಬದಲಿಸಿಕೊಂಡು ಹಣವೇ ಸರ್ವಸ್ವ ಎಂದು ಭಾವಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ಅವರಿಗೆ ಆದರ್ಶಪ್ರಾಯರಾದವರನ್ನು ಪರಿಚಯಿಸುವುದು ಅಗತ್ಯವಾಗಿದೆ. ಕನ್ನಡ ಮಾಧ್ಯಮ ಬೇಕು ಎನ್ನುವ ಮೊದಲು ಕನ್ನಡವನ್ನು ಕಲಿಸುವವರ್ಯಾರು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಯಾವ ಪಾಲಕರು ತನ್ನ ಮಕ್ಕಳಿಗೆ ಶಿಕ್ಷಕನಾಗುವಂತೆ ಸಲಹೆ ನೀಡುತ್ತಾರೋ ಅವರು ನನ್ನ ಪಾಲಿದೆ ದೇವರು ಎಂದರು. ಚಿಂತನಶೀಲ ತನ್ಮಯತೆ ಸಾಹಿತ್ಯದ ಜೀವಾಳವಾಗಿದ್ದ ಶುದ್ಧ ಚಿಂತನೆಯೂ ಇಲ್ಲದ ಶದ್ಧ ತನ್ಮಯತೆಯೂ ಅಲ್ಲದ ಸಾಹಿತ್ಯ ನಮ್ಮದಾಗಲಿ ಎಂದು ಅವರು ಆಶುಸಿಸಿದರು.

ಸಾಮಾಜಿಕ ತಾಣಗಳು ಅಪಗ್ರಾಸಕ್ಕೆ ಗುರಿಯಾಗುತ್ತಿರುವುದು ದರಂತವಾಗಿದ್ದು ಅದು ಅನಗತ್ಯ ಕಾಲಹರಣಕ್ಕೆ ಎಡೆಮಾಡಿಕೊಡದೆ ಉತ್ತಮ ವಿಚಾರಗಳಿಗೆ ಬಳಕೆಯಾಗಬೇಕು ಎಂಬ ತುಂಬು ಸಭೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

 .